ಸುದರ್ಶನ ಗುರುರಾಜರಾವ್ ನನ್ನ ಹೆಸರು. ವೃತ್ತಿಯಿಂದ ವೈದ್ಯ– ಅರಿವಳಿಕೆ ತಜ್ಞ.
ಕರ್ನಾಟಕದ ಬಳ್ಳಾರಿ,ಶಿವಮೊಗ್ಗ,ತುಮಕೂರು, ಬೆಂಗಳೂರು ಜಿಲ್ಲೆಗಳ ಹಳ್ಳಿಗಳಲ್ಲಿ ಪ್ರಾಥಮಿಕ, ಮಧ್ಯಮ ಹಾಗು ಪ್ರೌಢ ಶಿಕ್ಷಣ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರು ವೈದ್ಯಕೀಯ ವಿದ್ಯಾಲಯದಲ್ಲಿ ವೈದ್ಯಕೀಯ ತರಬೇತಿ ಮುಗಿಸಿ ಚಂಡೀಗಢದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಇಂಗ್ಲೆಂಡಿನಲ್ಲಿ ಅರಿವಳಿಕೆ ತಜ್ಞನಾಗಿ ಕೆಲಸ ಮಾಡುತ್ತಿದ್ದೇನೆ.
ಪ್ರವೃತ್ತಿಗಳು ಹಲವು. ಸಾಹಿತ್ಯ, ಲಘು ಸಂಗೀತ, ವಿಜ್ಞಾನ, ಗಣಿತ,ಕುರಿತ ವಿಷಯಗಳನ್ನು ಕುರಿತು ಓದುವುದು. ಕಲಿಕಾಕ್ರಮ ಹಾಗು ಬೋಧನೆ,ಭಾರತೀಯ ಸಂಸ್ಕೃತಿ, ತತ್ವಶಾಸ್ತ್ರ, ಪುರಾಣಗಳಲ್ಲಿ ನನಗೆ ಆಸಕ್ತಿ ಉಂಟು. ನನಗೆ ದಾಸ ಸಾಹಿತ್ಯ ಬಹಳ ಇಷ್ಟ. ಅಲ್ಲಮನ ವಚನಗಳನ್ನು ಕುರಿತು ಅಭ್ಯಾಸ ಮಾಡುವ ಅಭಿಲಾಷೆ ಇದೆ.
ಇತ್ತೀಚೆಗೆ ಸ್ನೇಹಿತರ ಪ್ರೋತ್ಸಾಹದಿಂದ ಕಥೆ, ಕವನ, ಹರಟೆ ಮೊದಲಾದ ಲೇಖನಗಳನ್ನು ಬರೆಯುತ್ತಿದ್ದೇನೆ.
ಎಸ್.ಎಲ್.ಭೈರಪ್ಪ ನನ್ನ ಅತಿ ಮೆಚ್ಚಿನ ಲೇಖಕರು. ಡಿ.ವಿ.ಜಿ, ಎ.ಆರ್. ಕೃಷ್ಣಶಾಸ್ತ್ರಿ, ಪಂಜೆ ಮಂಗೇಶರಾಯರು ನನ್ನ ಮೆಚ್ಚಿನ ಲೇಖಕರು. ಕು.ವೆಂ.ಪು ಅವರ ಕವನಗಳು ಮತ್ತು ಲಯ ನನಗೆ ಇಷ್ಟವಾದ ಪ್ರಾಕಾರ.ಕುಂ.ವೀರಭದ್ರಪ್ಪ ಮತ್ತು ಕೆ.ಎನ್.ಗಣೇಶಯ್ಯ ಹೊಸ ತಲೆಮಾರಿನ ಲೇಖಕರಲ್ಲಿ ನನಗೆ ಇಷ್ಟವಾದವರು.
ಪಿ.ಬಿ.ಶ್ರೀನಿವಾಸ್ ನನ್ನ ಮೆಚ್ಚಿನ ಗಾಯಕ ಹಾಗು ಎಸ್. ಜಾನಕಿ ನನ್ನ ಮೆಚ್ಚಿನ ಗಾಯಕಿ. ಕನ್ನಡ ಹಳೆಯ ಹಾಡುಗಳು ನನ್ನ ಗುಂಗು.
ಇಂಗ್ಲಿಷಿನ ವಿಷಯಕ್ಕೆ ಬಂದರೆ, ಅಯ್ನ್ ರ್ಯಾಂಡ್ ನನ್ನ ಮೆಚ್ಚಿನ ಲೇಖಕಿ.
ತನು ಕನ್ನಡ ಮನ ಕನ್ನಡ ನುಡಿ ಕನ್ನಡ ಎನ್ನವು!!!